ಉತ್ತರಪ್ರಭ ಸುದ್ದಿ
ಲಕ್ಷ್ಮೇಶ್ವರ: ಪಟ್ಟಣದ ಶ್ರೀಮತಿ ಕಮಲಾ ಮತ್ತು ವೆಂಕಪ್ಪ ಎಂ ಅಗಡಿ ಇಂಜಿನಿಯರಿಂಗ್ ಕಾಲೇಜಿನ 2021-22 ನೇ ಸಾಲಿನ ವಾರ್ಷಿಕ ಕ್ರೀಡಾ ಚಟುವಟಿಕೆಯನ್ನು ಸಮೀರ್ ಹರ್ಷವರ್ಧನ ಅಗಡಿ ಅವರು ಕ್ರಿಕೆಟ್ ಆಟ ಆಡುವದರ ಮೂಲಕ ಉದ್ಘಾಟಿಸಿದರು ಈ ವೇಳೆ ವಿದ್ಯಾರ್ಥಿಗಳಿಗೆ ಕ್ರೀಡಾ ಸಾಮಗ್ರಿಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಮೀರ್ ಹರ್ಷವರ್ಧನ ಅಗಡಿ ಕ್ರೀಡೆ ಅನ್ನೋದು ವಿದ್ಯಾರ್ಥಿ ಹಂತದಲ್ಲಿ ಬಹಳ ಮುಖ್ಯವಾದದ್ದು ಪಠ್ಯೇತರ ಚಟುವಟಿಕೆ ಜೊತೆಗೆ ಕ್ರೀಡೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದರಿಂದ ವಿದ್ಯಾರ್ಥಿಗಳಿಗೆ ದೈಹಿಕ ಶಕ್ತಿ ಮಾನಸಿಕ ಶಕ್ತಿ ಆರೋಗ್ಯದಿಂದ ಇರಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಹರ್ಷವರ್ಧನ್ ವಿ ಅಗಡಿ, ಉಪಾಧ್ಯಕ್ಷೆ ಗೀತಾ ಅಗಡಿ, ನಿರ್ದೇಶಕ ಪ್ರೇಮಾನಂದ್ ಶೆಟ್ಟಿ, ಪ್ರಾಚಾರ್ಯ ಉದಯಕುಮಾರ್ ಹಂಪಣ್ಣವರ, ಆಡಳಿತಾಧಿಕಾರಿ ಡಾ, ಶ್ರೀನಿವಾಸ ರಜಪೂತ್, ಪ್ರಾಧ್ಯಾಪಕ ಸೋಮಶೇಖರ್ ಕೆರಿಮನಿ, ದೈಹಿಕ ಶಿಕ್ಷಕ ಎಸ್, ಎಫ್, ಕೊಡ್ಲಿ, ಉಪಸ್ಥಿತರಿದ್ದರು.