ಮಾನವ ಸಂಘ ಜೀವಿ ಸಮಾಜದಲ್ಲಿದ್ದುಕೊಂಡು ಹೊಂದಿಕೊAಡು ಜೀವನ ಸಾಗಿಸುತ್ತಿದ್ದಾನೆ. ಈ ಜೀವನ ಸಾಗಿಸುವುದಕ್ಕಾಗಿ ದಿನಂಪ್ರತಿ ದೇಹ ಮತ್ತು ಬುದ್ಧಿಯನ್ನು ದಂಡಿಸಿ ದುಡಿಯುತ್ತಲೇ ಇದ್ದಾನೆ. ಈ ದಣಿದ ದೇಹ ಮತ್ತು ಬುದ್ಧಿಗೆ ವಿಶ್ರಾಂತಿ ನೀಡಲು ಅವನು ಮೊರೆ ಹೋಗುವುದು ಮನರಂಜನೆಯನ್ನು.
ಈ ಮನರಂಜನೆಗಳಲ್ಲಿ ಸಂಗೀತವು ಒಂದು. ಸಂಗೀತವು ಪ್ರತಿ ವ್ಯಕ್ತಿಯ ಜೀವನದ ಅವಿಭಾಜ್ಯ ಅಂಗವೆAದರೆ ತಪ್ಪಾಗಲಾರದು. ಜನನದಿಂದ ಮರಣದವರೆಗು ಸಂಗೀತ ಮಾನವನೊಂದಿಗೆ ಅವಿನಾಭಾವ ಸಂಬAಧ ಹೊಂದಿದೆ. ಮಗು ಗರ್ಭದಲ್ಲಿರುವಾಗಲೇ ಅದು ಸಂಗೀತದೊAದಿಗೆ ಸಂಬAಧ ಹೊಂದುತ್ತದೆ. ಮುಂದೆ ಅದು ಮಣ್ಣಲ್ಲಿ ಮಣ್ಣಾಗುವವರೆಗು ಸಾಗುತ್ತದೆ.
ಸೀಮಂತ, ನಾಮಕಣ, ಉಪನಯನ, ಮದುವೆ, ಜಾತ್ರೆ, ಹಬ್ಬ ಹರಿದಿನಗಳು, ಸಾವು ಹೀಗೆ ಮನುಷ್ಯನ ಜೀವನದಲ್ಲಿ ನಡೆಯುವ ಅತಿ ಮುಖ್ಯ ಕಾರ್ಯಕ್ರಮಗಳಲ್ಲಿ ಸಂಗೀತ ಇದ್ದೆ ಇರುತ್ತದೆ. ಜಾಗತೀಕರಣ ಮತ್ತು ತಂತ್ರಜ್ಞಾನದ ಯುಗದಲ್ಲಿ ಜೀವಿಸುತ್ತಿರುವ ಮಾನವನಿಗೆ ಕೆಲಸದಿಂದ ಸಿಗುವ ತೃಪ್ತಿಗಿಂತ ಒತ್ತಡವೇ ಹೆಚ್ಚು. ಹೀಗೆ ಎಷ್ಟೇ ಒತ್ತಡವಿದ್ದರು ಒಮ್ಮೆ ತಮಗಿಷ್ಟವಾದ ಸಂಗೀತವನ್ನು ಆಲಿಸಿದಾಗ ಆ ವ್ಯಕ್ತಿಗೆ ಹೊಸ ಚೈತನ್ಯ ಮೂಡುತ್ತದೆ. ಕೆಲಸದ ಕಡೆಗೆ ಹೆಚ್ಚು ಗಮನ ಕೊಡಲು ಸಾಧ್ಯವಾಗುತ್ತದೆ. ಇದರಿಂದ ಆರೋಗ್ಯವು ಸಹ ಉತ್ತಮವಾಗುತ್ತದೆ.


ಮಾನವನಿಗೆ ದೈಹಿಕ ಆರೋಗ್ಯ ಎಷ್ಟು ಮುಖ್ಯವೋ ಅಷ್ಟೇ ಮಾನಸಿಕ ಆರೋಗ್ಯವು ಮುಖ್ಯ. ಹೀಗಾಗಿಯೇ ಮಾನಸಿಕ ಆರೋಗ್ಯ ಸುಧಾರಿಸಲು ಸಂಗೀತ ಚಿಕಿತ್ಸೆಯನ್ನು ನೀಡುತ್ತಾರೆ. ಇದರಿಂದ ಆತಂಕ, ಖಿನ್ನತೆ, ನಿದ್ರಾಹೀನತೆ, ಒತ್ತಡವು ಕಡಿಮೆಯಾಗುತ್ತದೆ. ಬೌದ್ಧಿಕ ಮಟ್ಟ, ಸಂತೋಷ, ಆತ್ಮತೃಪ್ತಿ ಹೆಚ್ಚಾಗುತ್ತದೆ.
ಈ ಎಲ್ಲ ಅಂಶಗಳನ್ನು ಗಮನಿಸಿದಾಗ ಸಂಗೀತವು ವ್ಯಕ್ತಿಯ ಜೀವನಕ್ಕೆ ಬಹುಮುಖ್ಯವಾಗಿದೆ. ಸಂಗೀತವನ್ನು ಕೇವಲ ಮನರಂಜನೆಗೆ ಬಳಸದೆ, ಅದರಲ್ಲಿರುವ ಚಿಕಿತ್ಸಕ ಗುಣಗಳನ್ನು ಅರಿತುಕೊಂಡು ಸಂಗೀತ ಆಲಿಸಿದರೇ ಹೆಚ್ಚು ಪರಿಣಾಮಕಾರಿಯಾಗುತ್ತದೆ.

  • ಶ್ರೇಯಾ ಜೋರಾಪೂರ, ಸಂಗೀತ ವಿಭಾಗ
    ಕರಾಅವಿವಿ, ವಿಜಯಪುರ
Leave a Reply

Your email address will not be published. Required fields are marked *

You May Also Like

ಸರ್ಕಸ್ ಮಾಡಿದ್ರ ಸರ್ಕಾರ ನಡಿಸಾಕ್ ಆಗುತ್ತೇನು?: ಸರ್ಕಸ್ ಮಾಡಾಕ್ ಹೋಗಿದ್ ಕಿಟ್ಯಾನ್ ಸ್ಥಿತಿ ನೋಡ್ರಿ..!

ಕಟ್ಟಿ ಕಲ್ಲವ್ವ ಮತ್ ಕಿಡಗೇಡಿ ಕಿಟ್ಯಾ ಕಟ್ಟಿಗ್ ಕುಂತ್ ಸರ್ಕಸ್ ಮಾಡಿದ್ರ ಸರ್ಕಾರ ನಡಿಸಬಹುದು ಅಂತ ಪಂಟ್ ಹೊಡದಾರ. ಸರ್ಕಾರ ನಡಸಬೇಕು ಅನ್ನೋ ಭರದಾಗ ಸರ್ಕಸ್ ಮಾಡಾಕ್ ಹೋದ್ ಕಿಟ್ಯಾನ್ ಸ್ಥಿತಿ ಬಗ್ಗೆ ನಿಮ್ಮ ಉತ್ತರಪ್ರಭದ ಕಿಡಗೇಡಿ ಕಿಟ್ಯಾ ಅಂಕಣದಲ್ಲಿ ಹಾಸ್ಯ ಬರಹ

'ಲಾ' ಸಿನಿಮಾ ಬಗ್ಗೆ ಕುತೂಹಲಕಾರಿ ಮಾಹಿತಿ ಹಂಚಿಕೊಂಡ ನಟಿ ರಾಗಿಣಿ ಚಂದ್ರನ್‌

ಕನ್ನಡದ ʻಲಾʼ ಸಿನಿಮಾ ಬಿಡುಗಡೆಯ ಬಗ್ಗೆ ಚಿತ್ರದ ನಾಯಕಿ ಬಹಳ ಉತ್ಸುಕರಾಗಿದ್ದಾರೆ. ಇದೇ ಜುಲೈ 17…

ಸರಳ, ಸಹೃದಯಿ ಡಾ. ಕೆ.ಎಸ್.ಪರಡ್ಡಿ

ದ್ರವ್ಯಗುಣ ವಿಭಾಗದ ಮುಖ್ಯಸ್ಥರಾಗಿ ದೀರ್ಘಕಾಲ ಸೇವೆ ಸಲ್ಲಿಸಿದ ವೈದ್ಯ (ದಿನಾಂಕ: 31.05.2021 ರಂದು ವಯೋನಿವೃತ್ತಿ ಹೊಂದುತ್ತಿರುವ ನಿಮಿತ್ತ ಲೇಖನ) ಸರಳ; ಸದ್ಗುಣ ಸುಸ್ವಭಾವದ, ಕಾರ್ಯಸಾಧನಾ ಚಟುವಟಿಕೆಯುಳ್ಳವರೂ ಆಗಿರುವ ಪ್ರಾಧ್ಯಾಪಕ ಡಾ. ಕೆ.ಎಸ್.ಪರಡ್ಡಿಯವರು, ಗದುಗಿನ ಶ್ರೀ ಶಿವಾನಂದ ಬೃಹನ್ಮಠದ, ಸುಪ್ರಸಿದ್ದ ಡಿ.ಜಿ.ಎಂ.ಆಯುರ್ವೇದ ಮಹಾವಿದ್ಯಾಲಯದಲ್ಲಿ ದ್ರವ್ಯಗುಣ ವಿಭಾಗದ ಮುಖ್ಯಸ್ಥರಾಗಿ ದೀರ್ಘಕಾಲ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದುತ್ತಲಿದ್ದಾರೆ.

ಜನರು ಎಚ್ಚರ ತಪ್ಪಿದರೆ, ದೊಡ್ಡ ಅಪಾಯ ಸಂಭವಿಸಬಹುದು!!

ಜನರು ಎಚ್ಚರ ತಪ್ಪಿದರೆ, ದೊಡ್ಡ ಅಪಾಯ ಸಂಭವಿಸಬಹುದು!! ಬೆಂಗಳೂರು : ಕೊರೊನಾ ಲಾಕ್ ಡೌನ್ ನ್ನು…